ಪಿಶಾಚಿ ದೈವಕ್ಕೆ ಹೇಳಿದ್ದು

ಯಾಕೆ ಸೃಷ್ಟಿಸಿದೆ ನನ್ನನೀ ರೀತಿ
ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ
ಇರುಳಿನೇಕಾಂತದ ನೀರವತೆಯಲ್ಲಿ
ನನಗೆ ನಾನೇ ಆಗುವಂತೆ ಭೀತಿ

ಬೀಸಿತೆ ಗಾಳಿ? ಆ! ಏನದು ಎದ್ದು
ಮರಮರದ ಮೇಲು ಮರಮರವೆಂದು
ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ
ನೋಡುವೆನು ನಾನು ಒಮ್ಮೊಮ್ಮೊ ಕದ್ದು

ಒಗೆದು ತಲೆಕೆಳಗೆ ಮೇಲಕ್ಕೆ ಕಾಲು
ಜೋತಾಡುವುದು ಅಧೊಗತಿಯಷ್ಟೆ
ವೃಕ್ಷಗಳಲ್ಲಿ ಕೂಡ ಒಂದು ಮಾತ್ರವೆ
ಬಿಡುವುದು ವಿರುದ್ಧ ದಿಕ್ಕಿಗೆ ಬಿಳಲು

ಆದರೂ ದೃಷ್ಟಿ ಆಕಾಶದ ಕಡೆಗೆ
ಅದರಾಚೆಗೇನಿದೆಯೆಂಬುದು ಗೊತ್ತು
ಯಾರಿಗೂ ಹೇಳಲಾರದ ರಹಸ್ಯವ ಹೊತ್ತು
ಕಾಯುವೆನು ಯಾವ ಖಯಾಮತಿನ ವರೆಗೆ?

ಉರುಳಿಬಿದ್ದಾಗಲೂ ಒಂದೊಂದು ಮರವು
ಅಂದುಕೊಳ್ಳುವೆನು ಇದುವೆ ಕೊನೆ ಎಂದು
ಕೊನೆಯಿಲ್ಲ ಮೊದಲಿಲ್ಲ ಶತಮಾನಗಳು ಕಳೆದು
ದಿನವೊಂದರಲೆ ಎಷ್ಟು ಹುಟ್ಟು ಸಾವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾನಾವಳಿಗಳು
Next post ನಕ್ಕರೆ ನೋವಾಗುವುದು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys